ಈ ಮುಖ ಆ ಮುಖ

ಈ ಮಣ್ಣ ಗಡಿಗೆಯೊಳಗೆ ಅಮೃತ ಚಿಂತನ
ಆ ಚಿನ್ನದ ಕುಂಭದೊಳಗೆ ಅಮೇಧ್ಯ ವೇದನ
ಈ ತಿಪ್ಪೆಯೊಳಗಾಡಿ ಬಂತು ರನ್ನ ಮಣಿ
ಆ ಬಿಳಿಮಹಲಿನ ಹೂಹಾಸಿಗೆಯೊಳು
ಉರುಳಾಡಿ ದಣಿಯಿತು ಕಗ್ಗಲ್ಲ ಹರಳು
ಈ ಸೆರೆಗುಡಿದ, ಸೆರಗ ಹಿಡಿದ,
ಭಂಗಿ ಸೇದಿ, ಮಾಂಸ ಭುಂಜಿಸಿದ
ದೇಹದೊಳಗೆ ಹಣ್ಣು-ಕಮಲ ಪತ್ರಬಿಂದು
ಆ ತೀರ್ಥ ಕುಡಿದು ಪ್ರಸಾದಮಾತ್ರವ ತಿಂದು
ಬ್ರಹ್ಮಚರ್ಯವ ನಡೆದು
ಧರ್ಮಧೂಪವಾಸನೆ ಸೇವಿಸಿದ
ರೂಪದೊಳಗೆ ಅತ್ತಿ ಹಣ್ಣು

ಇಗೊ ಬಿಸಿಲಿಗೆಲ್ಲೋ ಮಾಯ ಇಬ್ಬನಿ
ಈ ಚಿಪ್ಪಿನೂಳಗೊಂದಾಣಿಮುತ್ತು
ಈ ಕರಟದೊಳಗೊಳ್ಳೆ ಎಳೆನೀರು
ಆ ಒಪ್ಪವಾದ ಭರಣಿಯಲಿ ಹುಳಿತ ಕಾಳು
ಆ ಬೆಳ್ಳಿ ಬಟ್ಟಲಲಿ
ದೇವರ ತೊಳೆದ ಮುಸುರೆ ನೀರು

ಈ ಸಪ್ಪೆ ಮೊಗದ ಕೆಳಗಡೆ
ಅಖಂಡಾನುಕಂಪದಾನಂದ
ಆ ಸಿಹಿನಗೆಯ ಹಿಂದೆ
ಮಸೆವ ಚೂಪಾದ ಹಲ್ಲು
ಈ ಹಣ್ಣಿನೊಳಗೆ ಭವಿತವ್ಯದ ಬೀಜ
ಆ ಹೂವಿನೊಳಗೆ ಹುಳಹರಿದಾಟ

ಈ ಮುಖವೊಂದು
ಆ ಮುಖವೊಂದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಐತಿಹಾಸಿಕ ಚಿತ್ರದುರ್ಗದ ಒನಕೆ ಓಬವ್ವ : ಒಂದು ಚಿಂತನೆ
Next post ಲಿಂಗಮ್ಮನ ವಚನಗಳು – ೬೬

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys